ಕನ್ನಡ ಚಿತ್ರ ರಂಗದ ಮೂರು ಪ್ರಮುಖ ವ್ಯಕ್ತಿಗಳು, ಹೆಸರಾಂತ ನಿರ್ಮಾಪಕ ಕೆ ಮಂಜು, ಜನಪ್ರಿಯ ಹಾಸ್ಯಪಾತ್ರಗಳ ನಾಯಕನಟ ಶರಣ್ ಹಾಗೂ ಬುದ್ದಿವಂತ ನಿರ್ದೇಶಕ ದಯಾಳ್ ಪದ್ಮನಾಭನ್ ಅವರು ಜೊತೆಯಾಗಿ ‘ಸತ್ಯ ಹರಿಶ್ಚಂದ್ರ’ ತಯಾರಿಕೆಗೆ ಸಾಗಿದ್ದಾರೆ. ಗಣೇಶ ಚತುರ್ಥಿ ಅಂದೆ ಬೆಳಗ್ಗೆ 6.15 ಘಂಟೆ ಇಂದ 7 ಘಂಟೆ ಒಳಗೆ ಸತ್ಯ ಹರಿಶ್ಚಂದ್ರ ಮೋದಿ ರಸ್ತೆಯಲ್ಲಿ ಇರುವ ಗಣೇಶನ ದೇವಸ್ಥಾನದಲ್ಲಿ ಮೂಹೂರ್ತ ಆಚರಿಸಿಕೊಂಡಿದೆ. ಶರಣ್ ಹಾಗೂ ಚಿಕ್ಕಣ್ಣ ಹಾಸ್ಯದ ಹೊನಲು ಹರಿಸಲು ಮತ್ತೆ ಒಂದಾಗಿದ್ದಾರೆ. ವಿಧ್ಯ ಲೇಖ ರಾಮನ್, ಸೀತಾ, ಶರತ್ ಲೋಹಿತಾಶ್ವ ಹಾಗೂ ಇತರರು ತಾರಾಗಣದಲ್ಲಿ ಇದ್ದಾರೆ.
ಮೊದಲ ದೃಶ್ಯವನ್ನು ವಿಘ್ನನಿವಾರಕ ಶ್ರೀ ಗಣೇಶನ ಮೇಲೆ ಚಿತ್ರೀಕರಿಸಿಕೊಂಡಿದ್ದಾರೆ ನಿರ್ದೇಶಕ ದಯಾಳ್ ಪದ್ಮನಾಭನ್. ಇವರು ಕನ್ನಡದಲ್ಲಿ ಜನಪ್ರಿಯ ಸಿನಿಮಾಗಳನ್ನು ನಿರ್ದೇಶನ ಮಾಡಿದವರು. ಇತ್ತೀಚ್ಚಿನ ಆಕ್ಟರ್ ಸಿನಿಮಾ ಪ್ರಶಸ್ತಿಗಳನ್ನು ಸಹ ಬಾಚಿಕೊಂಡಿತು. ಸತ್ಯ ಹರಿಶ್ಚಂದ್ರ ಸಿನಿಮಾಕ್ಕೆ ಮೊದಲ ಹಂತದ ಚಿತ್ರೀಕರಣ 24 ರಂದು ಶ್ರೀರಂಗಪಟ್ಟಣದಲ್ಲಿ ಪ್ರಾರಂಭ ಆಗಲಿದೆ. ಆನಂತರ ಜರ್ಮನಿ, ಜೆಕ್ ರಿಪಬ್ಲಿಕ್, ಸ್ವಿಟ್ಜರ್ಲ್ಯಾಂಡ್, ಆಸ್ಟ್ರಿಯ ದೇಶಗಳಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ.
ನಿರ್ಮಾಪಕ ಕೆ ಮಂಜು ಅವರ 38 ನೇ ಸಿನಿಮಾ ‘ಕೆ ಮಂಜು ಸಿನಿಮಾಸ್’ ಅಡಿಯಲ್ಲಿ ಈ ಸತ್ಯ ಹರಿಶ್ಚಂದ್ರ ರೊಮ್ಯಾಂಟಿಕ್ ಕಾಮಿಡಿ ಒಳಗೊಂಡ ಚಿತ್ರ. 1960ರ ದಶಕದಲ್ಲಿ ತಯಾರಾದ ಸತ್ಯ ಹರಿಶ್ಚಂದ್ರ ಸಿನಿಮಾಕ್ಕೆ ಸಂಬಂದ ಇಲ್ಲ.
ಈ ಚಿತ್ರಕ್ಕೆ ಕಥೆ ಹಾಗೂ ಚಿತ್ರಕಥೆ ಶ್ರೀ ಸ್ವಾಮೀಜಿ ಅವರು ಒದಗಿಸಿದ್ದಾರೆ, ರಘು ಸಮರ್ಥ ಅವರ ಸಂಭಾಷಣೆ ಈ ಚಿತ್ರಕ್ಕೆ ಇದೆ.
ಅರ್ಜುನ್ ಜನ್ಯ ಅವರ ಸಂಗೀತ ಇರುವ ಈ ಚಿತ್ರಕ್ಕೆ ಮಲಯಾಳ ಭಾಷೆಯಲ್ಲಿ ಪ್ರಸಿದ್ದಿ ಪಡೆದಿರುವ ಫೈಜಲ್ ಅಲಿ ಅವರ ಛಾಯಾಗ್ರಹಣ ಇದೆ.